ಗಣಪಜ್ಜ ಅನಕ್ಷರಸ್ತ, ಆದರೆ ಅವನ ಆಚಾರ-ವಿಚಾರ-ಅನುಸರಣೀಯ
ಗಣಪಜ್ಜ ಅನಕ್ಷರಸ್ತ , ಆದರೆ ಅವನ ಆಚಾರ-ವಿಚಾರ-ಅನುಸರಣೀಯ ****** { ವಿ.ಸೂ. ಈ ಬರಹ , ಹವ್ಯಕ ಕನ್ನಡ ಭಾಷೆಯಲ್ಲಿದೆ } ****** " ಅಲ್ದಾ ಗಣಪಜ್ಜ , ನೀ ಎಂತ ಬ್ರಾಹ್ಮಣನೋ ಮಾರಾಯಾ. ಮನೇಲಿ ದೇವರ ಪೂಜೆ ಇಲ್ಲೆ. ಮಂತ್ರ , ಶ್ಲೋಕ ಪಠಣ ಇಲ್ಲೆ. ದೇವಸ್ತಾನಕ್ಕೂ ಬತ್ತಲ್ಲೆ. ವರ್ಷಕ್ಕೊಂದು ಎಂತಾರೂ ದೇವರ ಕಾರ್ಯ ಮಾಡಿ ನಾಕು ಜನರ ಕರೆದು ಊಟನೂ ಹಾಕ ಪದ್ದತೀನೂ ಇಲ್ಲೆ. ಅದೇನು ಜನ್ಮವೋ ನಿಂದು ? " ಹೀಗೆ ಒಂದೇ ಸಮನೆ , ಗಣಪಜ್ಜನ ಮೇಲೆ , ಕಟುವಾದ ದೂಷಣೆಗಳ ಮಳೆ ಸುರಿಸಿದರು , ಕೃಷ್ಣಭಟ್ಟರು. ಕೃಷ್ಣಭಟ್ಟರು ಅಂದರೆ , ಆ ಸೀಮೆಯಲ್ಲಿಯೇ ಹೆಸರಾಂತ ಪುರೋಹಿತರು , ಧಾರ್ಮಿಕ ನೇಮ , ನಿಷ್ಠೆ , ಆಚರಣೆಯ ಶಿಸ್ತಿನ ಮನುಷ್ಯ. ಅವರ ಮಾತಿಗೆ ಎದುರುತ್ತರ ಕೊಡುವ ಧೈರ್ಯ ಯಾರಿಗೂ ಇರ್ತಿರ್ಲೆ. ಎಂದಿನಂತೆಯೇ , ಇಂದೂ , ಅವರ ಮಾತಲ್ಲಿ ವ್ಯಂಗ್ಯ , ಅಹಂ ತುಂಬ್ಕ್ಯಂಡಿತ್ತು. --- ಆದರೆ , ಗಣಪಜ್ಜ , ಅನಕ್ಷರಸ್ತ , ಮುಗ್ಧ. ಒಂಥರಾ ಪಾಪದವ. ಎಂದೂ ಕೃಷ್ಣಭಟ್ಟರಿಗೆ ಎದುರುತ್ತರ ಕೊಡದ ಅವ , ಇಂದು ಖಾರವಾಗಿಯೇ ಉತ್ತರ ಬಿಸಾಕಿಯೇಬಿಟ್ಟ. ------- " ಎಂತ ಹೇಳ್ತ್ರಾ ಭಟ್ರೆ. ಆನು ಬ್ರಾಹ್ಮಣ ಅಲ್ದಾ ? ದೇವರು , ನೇಮ , ನಿಷ್ಟೆ ಇಲ್ಯಾ ? ಪ್ರತಿದಿನ ಬೆಳಿಗ್ಗೆ 5-30 ಕ್ಕೇ ಎದ್ದು , ಬೆಟ್ಟಕ್ಕೆ ಹೋಗಿ , ಸೊಪ್ಪು ಕಡಿದು , ಗಟ್ಟಿ ಒಂದು ದೊಡ್ಡ ಹೊರೆ ರೆಡಿ ಮಾಡ್ಕ್ಯಂಡು , ...