ಪೋಸ್ಟ್‌ಗಳು

ಏಪ್ರಿಲ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಡಾ.ಎಚ್.ಎಸ್. ಮೋಹನ್ ಅವರ ಹೊಸಮನೆಯ ಉದ್ಘಾಟನೆ ಶುಭ ಸಂದರ್ಭ / ಯಕ್ಷಗಾನ

ಇಮೇಜ್
  ಡಾ.ಎಚ್.ಎಸ್. ಮೋಹನ್ ಅವರ ಹೊಸಮನೆಯ ಉದ್ಘಾಟನೆ ಶುಭ ಸಂದರ್ಭ / ಯಕ್ಷಗಾನ ಮುದ ಕೊಟ್ಟ ಕ್ಷಣಗಳು                                                                                              -ಚಿದಂಬರ ಕಾಳಮಂಜಿ ಬೆಂಗಳೂರು ನಿವಾಸಿಯಾಗಿರುವ ನಾನು , ಡಾ.ಮೋಹನ್ ಅವರ ಆತ್ಮೀಯ ಕರೆಯಿಂದಾಗಿ , ಅವರ ಹೊಸಬಾಳೆಯ   ಹೊಸಮನೆಯ ಉದ್ಘಾಟನೆಯ ನೆಪದಲ್ಲಿ ,   ಸ್ನೇಹಮಿಲನ ಮತ್ತು ಯಕ್ಷಗಾನದವನ್ನು ಆನಂದಿಸುವ ಸಲುವಾಗಿಯೇ ಹೋಗಿ ಬಂದೆ . ಈ ಸಂದರ್ಭದಲ್ಲಿ ನನಗೆ ತುಂಬಾ ಖುಷಿ ಕೊಟ್ಟಿದ್ದು ,   ಯಕ್ಷಗಾನ – ‘ ಜಾಂಬವತಿ ಕಲ್ಯಾಣ ’     ಇತ್ತೀಚೆಗೆ ಯಾಕೋ ನಾನು ಯಕ್ಷಗಾನ ನೋಡಿ ಖುಷಿಪಟ್ಟದ್ದು ಕಡಿಮೆಯೇ , ನನ್ನದೇ ಆದ ಕಾರಣಗಳಿಂದ...

ಅಗಲಿದ, ಆತ್ಮೀಯ, ಕಾಳಮಂಜಿ ಶ್ರೀನಿವಾಸನಿಗೆ, ಕಾಳಮಂಜಿ ಚಿದಂಬರಣ್ಣನಿಂದ ಒಂದು ಪತ್ರ (ನುಡಿನಮನ)

ಇಮೇಜ್
ಅಗಲಿದ ,  ಆತ್ಮೀಯ,  ಕಾಳಮಂಜಿ ಶ್ರೀನಿವಾಸನಿಗೆ , ಕಾಳಮಂಜಿ ಚಿದಂಬರಣ್ಣನಿಂದ  ಒಂದು ಪತ್ರ (ನುಡಿನಮನ)                                                                       ಏಪ್ರಿಲ್   2025 ಆತ್ಮೀಯ ಜನ್ನೆಮನೆ ಶ್ರೀನಿವಾಸ.  ಕಾವೆಂಶ್ರೀ ( ಕಾ ಳಮಂಜಿ ವೆಂ ಕಟಗಿರಿಯಪ್ಪ ಶ್ರೀ ನಿವಾಸ ) ಎಂದೇ ನೀನು ಉತ್ತರಕರ್ನಾಟಕ ಪ್ರಾಂತ್ಯದಲ್ಲಿ  ಪರಿಚಿತ , ಪ್ರಸಿದ್ಧ.  ಆದರೆ ನನಗೆ ಮತ್ತು ನಮ್ಮ ಹಳ್ಳಿ ಕಾಳಮಂಜಿಯ ನಿನ್ನ  ನಿಕಟವರ್ತಿಗಳಿಗೆ ಹಾಗೆ ಕರೆದರೆ ಯಾಕೋ ಆಪ್ತತೆ ಮೂಡುವುದಿಲ್ಲ. ಆದ್ದರಿಂದಲೇ ನಿನ್ನನ್ನು  ಜನ್ನೆಮನೆ ಶ್ರೀನಿವಾಸ ಎಂಬ ಸಂಬೋಧನೆಯಿಂದ ಪ್ರಾರಂಭಿಸಿದೆ. ಇತ್ತೀಚೆಗೆ ನೀನು ತೀವ್ರ ಅನಾರೋಗ್ಯಕ್ಕೆ ಬಲಿಯಾಗಿ , 58 ನೇ ವಯಸ್ಸಿಗೇ , ಈ ಲೋಕದಿಂದ ದೂರವಾಗಿಬಿಟ್ಟೆ. ತುರ್ತಾಗಿ ನಿರ್ಗಮಿಸಿಬಿಟ್ಟೆ.   ನೀನಿಲ್ಲ ಎಂಬುದನ್ನು  ಊಹಿಸಲೂ ಆಗ್ತಾ ಇಲ್ಲ. ಈ ಸಂದರ್ಭದಲ್ಲಿ , ಯಾಕೋ ನನ್ನಂತರಾಳದಿಂದ ಸ್ಫುರಿಸುತ್ತಿರುವ ಅನಿಸಿಕೆ – ಭಾವನೆಗಳನ್ನು ವ್ಯಕ್ತಪಡಿಸಬೇಕು ಎಂಬ ತುಡಿತ ನನಗೆ.  ಆದರೆ , ಒಂದು ಬಗೆಯ ತಳಮಳ , ಆ...