ಕವಿತಾ ಸಂಗೀತ ಸಲ್ಲಾಪ - ಸಾಗರದ ಕಾರ್ಯಕ್ರಮ-16 ಜನವರಿ 26 - ಒಂದು ಅವಲೋಕನ
‘ ಕವಿತಾ ಸಂಗೀತ - ಸಲ್ಲಾಪ ’ ಕಾರ್ಯಕ್ರಮ ಸಾಗರ ( ಶಿವಮೊಗ್ಗ ಜಿಲ್ಲೆ) ಕಾರ್ಯಕ್ರಮ 16 ಜನವರಿ 26 ( ಒಂದು ಕಿರು ಅವಲೋಕನ ) - ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಆಧರಿಸಿ ಅದು ಮಾಮೂಲೀ ಸುಗಮ ಸಂಗೀತ ಕಾರ್ಯಕ್ರಮ ಆಗಿರಲಿಲ. ಕಾರ್ಯಕ್ರಮದ ಶೀರ್ಷಿಕೆಯೇ ಭಿನ್ನ – ವಿಶೇಷ ಕವಿತಾ ಸಂಗೀತ-ಸಲ್ಲಾಪ ಎತ್ತರದ ದೊಡ್ಡ ವೇದಿಕೆ ಅಲ್ಲ ಯಾವುದೇ ಬ್ಯಾನರ್ ಇಲ್ಲ , ಹತ್ತಾರು ಗಾಯಕರು ಇಲ್ಲ. ವೈಭವದ ವಾದ್ಯಸಂಗೀತಗಳು ಇಲ್ಲ. ನೂರಾರು ಮಂದಿ ಕೇಳುಗರಿಲ್ಲ . ಮನೆಯಂಗಳದಲ್ಲಿ ಜರುಗಿದ ಪುಟ್ಟ ಕಾರ್ಯಕ್ರಮವಾದರೂ , ನೆನಪಿನಲ್ಲುಳಿಯುವ ಕಾರ್ಯಕ್ರಮ. ಕಾರ್ಯಕ್ರಮ ಜರುಗಿದ್ದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ; ನಿವೃತ್ತ ಶಿಕ್ಷಕ , ಹರಿಕಥೆ ಕಲಾವಿದ , ಸಂಗೀತ –ಸಾಹಿತ್ಯ ಕಲಾಪೋಷಕರಾದ ದತ್ತಾತ್ರೇಯ ಹೆಗ್ಡೆ ಮತ್ತು ಅವರ ಪತ್ನಿ , ಶಿಕ್ಷಕಿ ಗಂಗೂಬಾಯಿಯವರ ಮನೆ ‘ ಸ್ಪಂದನ ’ ದಲ್ಲಿ. ಅದು ಸಾಂಪ್ರದಾಯಿಕ ಮಾಮೂಲೀ ಸುಗಮ ಸಂಗೀತ ಕಾರ್ಯಕ್ರಮ ಅಲ್ಲ , ಹೇಗೆ ? ಎರಡು ಪ್ರಮುಖ ಅಂಶಗಳು 1. ಸಾಹಿತ್ಯ ಪ್ರಧಾನ ಸಂಗೀತ 2. ವೈವಿಧ್ಯತೆ · ಕವಿತೆಯ ವಸ್ತು / ವಿಷಯ ಗಳಲ್ಲಿ ವೈವಿಧ್ಯತೆ · ...