ಮುರುಟುತ್ತಿದ್ದ ಕುಸುಮ ಅರಳಿದ ಕಥೆ
CK ಮಾಸ್ತರನ ಅನುಭವ / ಚಿಂತನ / ಮಂಥನ ಬರಹ ಮಾಲಿಕೆ ************* ಮುರುಟುತ್ತಿದ್ದ ಕುಸುಮ ಅರಳಿದ ಕಥೆ ************* ನೈಜ ಘಟನೆಯಾಧಾರಿತ *********** ಯಾಕೆ ಈ ಬರಹ ? ಈ ಮೂರು ಉದ್ದೇಶಗಳಿಗಾಗಿ 1. ಸ್ವಾತ್ಮಸಂತೋಷ 2. ಅಕಸ್ಮಾತ್ ಈ ಬರಹ ನಾಕು ಜನಕ್ಕೆ (ವಿದ್ಯಾರ್ಥಿ , ಪೋಷಕ ಮತ್ತು ಶಿಕ್ಷಕ ಸಮುದಾಯಕ್ಕೆ) ಪ್ರಯೋಜನ ಆದರೂ ಆಗಲಿ 3. ಇತ್ತೀಚೆಗಿನ್ನೂ ಅಂಬೆಗಾಲಿಡುತ್ತಿರುವ ನನ್ನೊಳಗಿನ ಬರಹಗಾರನನ್ನು ಬೆಳೆಸುವುದಕ್ಕಾಗಿ ************ ಮುರುಟುತ್ತಿದ್ದ ಕುಸುಮ ಅರಳಿದ ಕಥೆ ************* ದೃಶ್ಯ #1 – ಸಮಾರಂಭ- ವಿದ್ಯಾರ್ಥಿಗಳಿಗೆ ಆತನ ಸ್ಪೂರ್ತಿಕರ ಉಪದೇಶ ಭಾಷಣ --------- ವಿದ್ಯಾರ್ಥಿಗಳನ್ನು ಕುರಿತು ಆತ ಸುಮಾರು 45 ನಿಮಿಷ ಮಾಡಿದ ಭಾಷಣಕ್ಕೆ , ಸುಮಾರು ಸಾವಿರ ವಿದ್ಯಾರ್ಥಿಗಳು ಎದ್ದು ನಿಂತು ಕರತಾಡನ ಮಾಡಿದರು. ಅಷ್ಟು ಅದ್ಭುತವಾಗಿತ್ತು ಆತನ ಅನುಭವದ ಮಾತುಗಳು ಮತ್ತು ವಿದ್ಯಾರ್ಥಿಗಳಿಗೆ ನೀಡಿದ ಮಾರ್ಗದರ್ಶನ. ಇದು ಜರುಗಿದ್ದು , ಬೆಂಗಳೂರಿನ ಪ್ರತಿಷ್ಟಿತ ಇಂಜಿನಿಯರಿಂಗ್ ಕಾಲೇಜ್ನ , ಸುಂದರ ಭವ್ಯ ಸಭಾಂಗಣದಲ್ಲಿ , ಹಿಂದಿನ ವರ್ಷ distinction ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ – ಬಹುಮಾನ ಪ್ರಧಾನ , ಸಂಭ್ರಮದ ಅದ್ದೂರೀ ಸಮಾರಂಭ. ಆತ ಅಂದರೆ ...