ಇಷ್ಟೂ ತಿಳಿಯಲಿಲ್ಲವೇನೇ – ಆ ದಡ್ಡ ದೇವ್ರಿಗೆ? { ತೊದಲುನುಡಿದೀಪ - ಸಂಚಿಕೆ #3 }-ಬರಹ-ಸಂಗೀತ


ತೊದಲುನುಡಿದೀಪ
{ಬರಹ ಮಾಲಿಕೆ }
#ತೊದಲುನುಡಿದೀಪ #3
*****
ನಮ್ಮನೆ ಪುಟ್ಟಪ್ರಣತಿ ಪ್ರಸ್ತುತಿ
-----------------


ಇಂದಿನ ಸಂಚಿಕೆ ಶೀರ್ಷಿಕೆ
*************************************
ಇಷ್ಟೂ ತಿಳಿಯಲಿಲ್ಲವೇನೇ ಆ ದಡ್ಡ ದೇವ್ರಿಗೆ?
**************************************
ಮಿತ್ರರೇ,
ಇಂದಿನ ಸಂಚಿಕೆ, ಅಕ್ಷರಗಳಿಗಿಂತ ಹೆಚ್ಚಾಗಿ, ಪುಟ್ಟ
ಹಾಡಿನಮೂಲಕ.
ಇಂದಿನ ಸಂಚಿಕೆ, ನಮ್ಮ ಮೊಮ್ಮಗಳದ್ದಲ್ಲ ಸಾಮಾನ್ಯವಾಗಿ ಎಲ್ಲಾ ಮಕ್ಕಳದ್ದೂ.
50 ವರ್ಷಗಳ ಹಿಂದೆಯೇ,
ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರು
ಮಕ್ಕಳ ಅಂತರಾಳಕ್ಕೆ ಇಳಿದು ರಚಿಸಿದ ಕವಿತೆ( ಭಾವಗೀತೆ).
ಕವಿ, ‘ಮಗುವಾಗಿ ಅಮ್ಮನನ್ನು ಕೇಳುವ ಮುಗ್ಧಪ್ರಶ್ನೆ .
ಕೇವಲ ಪ್ರಶ್ನೆ ಅಷ್ಟೇ ಅಲ್ಲ ,
ಮೇಲ್ನೋಟಕ್ಕೆ ಆಸ್ತಿಕರನ್ನು ಕೆರಳಿಸಬಹುದಾದಂತಹ ,ಒಂದು ಮಹತ್ವದ ಹೇಳಿಕೆಯನ್ನು ಬಿಸ್ಸಾ...ಕ್ತಾ ಇದೆ ಮಗು:
ಇಷ್ಟೂ ತಿಳಿಯಲಿಲ್ಲವೇನೇ ? ಜಗವ ಮಾಡಿದಂಥ ದೇವ ನಿಜವಾಗಿಯೂ ದಡ್ಡನು
*********
ಈ ಕವಿತೆಗೆ ಸಂಗೀತದ ಆಭರಣ ತೊಡಿಸಿ,
ಇಬ್ಬರು ಮಕ್ಕಳ ಧ್ವನಿಯ ಮೂಲಕ, 10 ವರ್ಷಗಳ ಹಿಂದೆಯೇ ಹಂಚಿದ್ದೀನಿ.
ಮತ್ತೆ ಮತ್ತೆ ಹಂಚಿಕೊಳ್ತಾ ಇರ್ತೀನಿ.
*****
ಹಾಡನ್ನು ಕೇಳಿ
ಮಕ್ಕಳ ಪ್ರಶ್ನೆಯನ್ನು ಆನಂದಿಸಿ
********
ಹಾಡಿದ ಪುಟಾಣಿಗಳು
ಅದಿತಿ,
ಮನೋಜ್ಞ
------
ಸಂಗೀತ ಸಂಯೋಜನೆ
ಚಿದಂಬರ ಕಾಳಮಂಜಿ
-------
ವಾದ್ಯ ಸಂಗೀತ ವಿನ್ಯಾಸ
ಪ್ರವೀಣ್ ಡಿ ರಾವ್
**************************************
ಹಾಡನ್ನು ಕೇಳಿದ ನಂತರವೇ ಮುಂದಿನ ಸಾಲುಗಳನ್ನು ಓದಿ.
**************************************
ಮಕ್ಕಳು ಕೇಳುವ ಇಂತಹ ಅನೇಕ ಪ್ರಶ್ನೆಗಳಿಂದ ನಾ ಕಲಿತದ್ದು
( ಅಥವಾ ನನ್ನೊಳಗೆ ಹಚ್ಚಿದ ಹಣತೆ):
--------
ಎಲ್ಲಿಯವರೆಗೆ
ನಮ್ಮಂತರಂಗದೊಳಗೊಂದು
ಮಗು
ಸಕ್ರಿಯವಾಗಿರುತ್ತದೆಯೋ,
ಅಲ್ಲಿಯವರೆಗೆ ಜೀವನೋತ್ಸಾಹ ,
ಜೀವನಪ್ರೀತಿ ಖಾತರಿ
ಯಾಕೆಂದರೆ
1. ಮಗುವಿಗೆ ಎಲ್ಲವೂ ಕುತೂಹಲ
2. ತನ್ನ ಅರಿವಿಗೆ ಬರುವ ಎಲ್ಲಾ ವಸ್ತು, ವಿಚಾರಗಳ ಬಗ್ಗೆ ಏನು, ಯಾಕೆ, ಹೇಗೆ ಇತ್ಯಾದಿ ಪ್ರಶ್ನೆಗಳನ್ನು ಕೇಳ್ತಾನೇ ಇರುತ್ತೆ; ನಿರ್ಜೀವ ವಸ್ತುಗಳಿಗೂ ತನ್ನದೇ ಆದ ಕಲ್ಪನಾ ಪ್ರಪಂಚದಲ್ಲಿ , ಜೀವಂತಿಕೆ ನೀಡುತ್ತೆ
3. ಮಗುವಿನದು ನಿಷ್ಕಳಂಕ ಪ್ರೀತಿ ;
ಕೋಪ ಮಾಡಿಕೊಂಡರೂ , ಮರು ಕ್ಷಣಲ್ಲಿಯೇ ಮರೆತುಬಿಡುತ್ತೆ
4. ಮಗುವಿಗೆ, ನಿನ್ನೆಯ ಕೊರಗಿಲ್ಲ, ನಾಳೆಯ ಭಯವಿಲ್ಲ
, ಈ ಕ್ಷಣದ ಅನುಭವ ಮಾತ್ರ ವೇದ್ಯ
...ಇನ್ನೂ ಹತ್ತು ಹಲವು
*********
ಏನಂತೀರಾ?
----
ನಮಸ್ಕಾರ
-----
Facebook Link 
https://www.facebook.com/1027295299/videos/515053714307453/


ಕಾಮೆಂಟ್‌ಗಳು