ಗಣಪಜ್ಜ ಅನಕ್ಷರಸ್ತ, ಆದರೆ ಅವನ ಆಚಾರ-ವಿಚಾರ-ಅನುಸರಣೀಯ



ಗಣಪಜ್ಜ ಅನಕ್ಷರಸ್ತ,
ಆದರೆ ಅವನ ಆಚಾರ-ವಿಚಾರ-ಅನುಸರಣೀಯ
******
{ವಿ.ಸೂ.
ಈ ಬರಹ, ಹವ್ಯಕ ಕನ್ನಡ ಭಾಷೆಯಲ್ಲಿದೆ
}
******



" ಅಲ್ದಾ ಗಣಪಜ್ಜ ,
ನೀ ಎಂತ ಬ್ರಾಹ್ಮಣನೋ ಮಾರಾಯಾ. ಮನೇಲಿ ದೇವರ ಪೂಜೆ ಇಲ್ಲೆ. ಮಂತ್ರ, ಶ್ಲೋಕ ಪಠಣ ಇಲ್ಲೆ. ದೇವಸ್ತಾನಕ್ಕೂ ಬತ್ತಲ್ಲೆ.
ವರ್ಷಕ್ಕೊಂದು ಎಂತಾರೂ  ದೇವರ ಕಾರ್ಯ ಮಾಡಿ ನಾಕು ಜನರ ಕರೆದು ಊಟನೂ ಹಾಕ ಪದ್ದತೀನೂ ಇಲ್ಲೆ.
ಅದೇನು ಜನ್ಮವೋ ನಿಂದು?
"
ಹೀಗೆ ಒಂದೇ ಸಮನೆ,  ಗಣಪಜ್ಜನ ಮೇಲೆ, ಕಟುವಾದ ದೂಷಣೆಗಳ ಮಳೆ ಸುರಿಸಿದರು,  ಕೃಷ್ಣಭಟ್ಟರು.
ಕೃಷ್ಣಭಟ್ಟರು ಅಂದರೆ,
ಆ ಸೀಮೆಯಲ್ಲಿಯೇ ಹೆಸರಾಂತ  ಪುರೋಹಿತರು, ಧಾರ್ಮಿಕ  ನೇಮ, ನಿಷ್ಠೆ, ಆಚರಣೆಯ ಶಿಸ್ತಿನ ಮನುಷ್ಯ. ಅವರ ಮಾತಿಗೆ ಎದುರುತ್ತರ ಕೊಡುವ ಧೈರ್ಯ ಯಾರಿಗೂ ಇರ್ತಿರ್ಲೆ.
ಎಂದಿನಂತೆಯೇ, ಇಂದೂ,
   ಅವರ ಮಾತಲ್ಲಿ ವ್ಯಂಗ್ಯ, ಅಹಂ ತುಂಬ್ಕ್ಯಂಡಿತ್ತು.
---
ಆದರೆ,
ಗಣಪಜ್ಜ ,
ಅನಕ್ಷರಸ್ತ,ಮುಗ್ಧ. ಒಂಥರಾ ಪಾಪದವ.
ಎಂದೂ ಕೃಷ್ಣಭಟ್ಟರಿಗೆ  ಎದುರುತ್ತರ ಕೊಡದ ಅವ, ಇಂದು ಖಾರವಾಗಿಯೇ ಉತ್ತರ ಬಿಸಾಕಿಯೇಬಿಟ್ಟ.
 -------
" ಎಂತ ಹೇಳ್ತ್ರಾ ಭಟ್ರೆ.
ಆನು ಬ್ರಾಹ್ಮಣ ಅಲ್ದಾ?
 ದೇವರು, ನೇಮ , ನಿಷ್ಟೆ ಇಲ್ಯಾ?
 ಪ್ರತಿದಿನ ಬೆಳಿಗ್ಗೆ 5-30 ಕ್ಕೇ ಎದ್ದು, ಬೆಟ್ಟಕ್ಕೆ ಹೋಗಿ, ಸೊಪ್ಪು ಕಡಿದು, ಗಟ್ಟಿ ಒಂದು ದೊಡ್ಡ ಹೊರೆ ರೆಡಿ ಮಾಡ್ಕ್ಯಂಡು, ತ್ವಾಟದ ಮರಕ್ಕೆಲ್ಲಾ ಹಾಕ್ತಿ.
 ಎಂಗೆ ಇಪ್ಪ ಅರ್ದ ಎಕರೆ ತ್ವಾಟ- ಭೂಮಿತಾಯಿನೇ ದೇವ್ರು.
ಆ ಹಾಸ ಸೊಪ್ಪೇ,  ಬಿಲ್ವಪತ್ರೆ. ಪುಷ್ಪ.
ಆಮೇಲೆ ಕಾದಿಗೆಗೆ ನೀರು ಹಾಯಿಸ್ತಿ.
ಅದೇ ಎಮ್ಮನೆ ದೇವ್ರಿಗೆ ಅಭಿಷೇಕ.
ಅದ್ನೆಲಾ ಮಾಡಕಾದ್ರೆ, ಎಂಗೆ ಅರ್ಥ ಆಪ ಕನ್ನಡ ಭಾಷೆಲಿ, ಉದಯರಾಗದ ಹಾಡು, ಭಜನೆ ಹೇಳ್ಕ್ಯತ್ತಿ.
ಅದೇ ಮಂತ್ರ.
ಮನಿಗೆ ಬಂದು , ಕೊಟ್ಟಿಗೆಲಿಪ್ಪ ನಾಕು ದನಕರದ ವಾಗೈತಿ ಮಾಡ್ತಿ.
ವರ್ಷಕ್ಕೊಂದ್ಸರ್ತಿ,
ಕೊನೆಕೊಯ್ಲು ಆದಮೇಲೆ,
ಎಲ್ಲಾ ಆಳುಗಳನ್ನೂ‌ ಕರೆದು ಒಂದು ಪಾಯ್ಸದ ಊಟ ಹಾಕ್ತಿ.
ಅದೇ ಆನು‌‌ ಮಾಡೋ ಪಾರಾಯಣ, ಸಂತರ್ಪಣೆ.
ಶ್ರದ್ಧೆಯಿಂದ ಇದನ್ನು ಮಾಡ್ಕ್ಯೋತ ಬೈಂದಿ,ಎಷ್ಟೋ ವರ್ಷಗಳಿಂದ.
...........
ಈಗ ಹೇಳಿ ಆನು‌ ಬ್ರಾಹ್ಮಣ ಹೌದಾ , ಅಲ್ದಾ ಅಂತ.
ಯಾವ ದೇವರೂ ಎನ್ನ  ನಾಸ್ತಿಕ ಅಂತ ಶಾಪ ಕೊಟ್ಟಿದ್ವಿಲ್ಲೆ ಇಲ್ಲೀವರೆಗೂ.
ನೀವೆಂತ ಎನ್ನ ಬಗ್ಗೆ ದೂಷಣೆ ಮಾಡದು?
"
-----------
-----------
ಕೃಷ್ಣಭಟ್ಟರು ಸ್ಥಬ್ದರಾದರು.
-----------
ಗಣಪಜ್ಜ ಮುಂದುವರೆಸಿ ಹೇಳಿದ
"
ಭಟ್ರೇ, ಒಂದು ವಿಚಾರ ಹೇಳ್ತಿ, ಸರಿಯಾಗಿ ಕೇಳ್ಕ್ಯಳಿ.
ನಿಮ್ಮ ಹಾದಿ ನಿಮಗೆ, ಎನ್ನ ಹಾದಿ ಎನಗೆ
"
-----------
ಗಣಪಜ್ಜ ,
ತನ್ನದು 'ಕರ್ಮಮಾರ್ಗ',
ಭಟ್ಟರದು 'ಭಕ್ತಿಮಾರ್ಗ'
ಅಂತ ಬಿಡಿಸಿ ಹೇಳಿದ್ನೇ ಇಲ್ಲೆ.
********
********
ಈ ಘಟನೆನ, 50 ವರ್ಷಗಳ ಹಿಂದೆ,  ಎನ್ನ ಅಪ್ಪ , ( ಶೇಡಿಮನೆ ನಾರಣಣ್ಣ ) ,  ಆನು  ಪ್ರಾಥಮಿಕ ಶಾಲೆಲಿದ್ದಾಗ ಹೇಳಿದ್ದು.
************
 ನಂತರ,   ಶಾಲೆಲಿ ಗುರುಗಳು
---
ಬಸವಣ್ಣನವರ
'ಕಾಯಕವೇ ಕೈಲಾಸ'
---
ಇಂಗ್ಲಿಷ್‌ ಪಾಠದಲ್ಲಿ
'Work is worship'
---
ಭಗವದ್ಗೀತೆಯ
"ಕರ್ಮಣ್ಯೇವಾಧಿಕಾರಸ್ತೇ...."
----
ಕಲಿಸಿಕೊಟ್ಟಾಗ ಅನಿಸ್ತಾ ಇದ್ದದ್ದು:
" ಎನ್ನಪ್ಪ,  ಗಣಪಜ್ಜನ ಘಟನೆ ಮೂಲಕ, ಇದನ್ನು ಎಂದೋ ಎನಗೆ  ಕಲಿಸಿದ್ನಲ್ಲಾ"
ಅಂತ
********
********
ಇಂದು ಮೆಲುಕು ಹಾಕ್ತಾ ಇರಕಾದ್ರೆ ಎನಗನ್ಸಿದ್ದು:
-----
4 ದಶಕಗಳ ಎನ್ನ   ವೃತ್ತಿಜೀವನದ
ಯಶಸ್ಸಿಗೆ,
ಸಾರ್ಥಕತೆಗೆ,
ಕಾರಣವಾದ ಹಲವಾರು ಅಂಶಗಳಲ್ಲಿ, 
ಅನಕ್ಷರಸ್ತ ಆದರೆ  ಸಂಸ್ಕಾರವಂತನಾದ ಗಣಪಜ್ಜನಂತಹ ಅನೇಕ ವ್ಯಕ್ತಿಗಳ ಪ್ರಭಾವ ಕಾರಣ
-----
ನಿಮ್ಮ ಬದುಕಿನಲ್ಲಿಯೂ ಇಂತಹ ಗಣಪಜ್ಜರು ಪ್ರಭಾವ ಬೀರಿರ್ತ ತಾನೇ?

ಕಾಮೆಂಟ್‌ಗಳು