ಗಿಡದ ಜೊತೆ ನನ್ನ ಸಲ್ಲಾಪ - ಸಂಚಿಕೆ #2 (ಗಿಡ ಅರಳಿಸಿದ ‘ವೇದ-ಉಪನಿಷತ್-ಭಗವದ್ಗೀತೆ ’ )





ಗಿಡದ ಜೊತೆ ನನ್ನ ಸಲ್ಲಾಪ -

ಬರಹ ಸರಣಿ

ಸಂಚಿಕೆ #2

*******************************

ಗಿಡ ಅರಳಿಸಿದ ‘ವೇದ-ಉಪನಿಷತ್-ಭಗವದ್ಗೀತೆ ’ 

*******************************

ನಿನ್ನೆ, ತಾಯಿ ಮಕ್ಕಳನ್ನು ಅಗಲಿಸದೆಯೇ 

ಮಾನಸ ಪೂಜೆಮಾಡಿ, 

ಮಹೋಪಕಾರ ಗೈದ ಅಹಂಕಾರದಲ್ಲಿ

ಇಂದು ಬೀಗುತ್ತ

ಗಿಡವ ಮಾತಾಡಿಸಲು ಹೋದೆ

-----

ಓಹ್...

ಇದೇನಿದು!?

ಗಿಡ ತನ್ನ ಮಾಮೂಲೀ ಲವಲವಿಕೆಯ ಸ್ಥಿತಿಯಲ್ಲಿ ಇಲ್ಲ

ಬಾಡಿಹೋಗಿದೆ

ನೋವೋ, ಹತಾಶೆಯೋ, ಕೋಪವೋ ತಿಳಿಯದು

-------

“ಯಾಕೆ?

ಏನಾಯ್ತು?”

ಕೇಳಿದೆ

ಒಮ್ಮೆಲೇ ಅಳಲು ಆರಂಭಿಸಿತು ಗಿಡ

ಗುಡುಗಿತು ನನ್ನ ಮೇಲೆ

"ಯಾಕೆ ಅದೆಷ್ಟೋ ವರ್ಷಗಳಿಂದ

 ನಾ ಆನಂದಿಸುತ್ತಿದ್ದ

ಭಾಗ್ಯವನ್ನು ಕಿತ್ತುಕೊಂಡೆ?

ನಾ ಗಳಿಸುವ  ಪುಣ್ಯದ ಮೇಲೆ 

ಈರ್ಷ್ಯೆಯೇ ನಿನಗೆ?

"

ಇನ್ನೂ ಏನೇನೋ ಬಡಬಡಿಸಿತ್ತಲೇ ಇತ್ತು

----------

ಆಘಾತ ನನಗೆ

"ಅದೇನು ಸರಿಯಾಗಿ ಹೇಳು"

ಎಂದು ಗದರಿಸಿದೆ

----

ನಾ ಅರಳಿಸಿದ ಸುಂದರ, 

ಪರಿಮಳದ ಹೂವುಗಳು,

ನನ್ನ ( ಮತ್ತು ನಿನ್ನ)

ಸೃಷ್ಟಿ, ಸ್ಥಿತಿಗೆ

ಕಾರಣನಾದ

ಆ ಭಗವಂತನ

ಮುಡಿಯೇರಿ ಪಾವನವಾಗುವ,

ಪುಣ್ಯ ಗಳಿಸುವ

ಭಾಗ್ಯವನ್ನು ಕಿತ್ತುಕೊಳ್ಳಲಿಲ್ಲವೇ ನೀನು?

ಸಂಜೆಯೊಳಗೆ

ಬಾಡಿ,

ಮುದುರಿ,

ಮಣ್ಣಾಗುವ ನನ್ನ ಕಂದಮ್ಮಗಳು,

ಆ ದೇವನಲಂಕರಿಸಿದರೆ 

ಪುಣ್ಯತಮವಲ್ಲವೇ?

"

-----

ಮತ್ತೆ ಗೊಂದಲದ

ಅಲೆ ನನ್ನೊಳಗೆ

-----

ಒಂದು ವ್ಯಂಗ್ಯ/ವಿನೋದ ಮಾಡುವ

ಬಯಕೆ ಮೂಡಿತು

----

ನಿನ್ನನ್ನೇ ಆ ದೇವನಿಗೆ ಅರ್ಪಿಸಿಬಿಡಲೇ?

----

ಗಹಗಹಿಸಿ ನಕ್ಕಿತು ಗಿಡ

"ಅಂದರೆ!?

ನನ್ನ ಸಾವು?

------

ಅಯ್ಯೋ ಬೆಪ್ಪೆ,

ನನ್ನನ್ನೇ ಕಿತ್ತರೆ,

ನಾಳೆ ಆ ದೇವನಿಗೆ

ಹೂವು ಎಲ್ಲಿಂದ?

ಅಲ್ಲದೆಯೇ,

ನಿನಗೆಲ್ಲಿದೆ ಹಕ್ಕು ?

ನನ್ನ ಸಾವನ್ನು

ನಿರ್ಧರಿಸುವವ

ಲಯಕರ್ತ ದೇವ ಮಾತ್ರ

----

ನನ್ನ ವಿನೋದ ನನಗೇ

 ಚಾಟಿಯೇಟಾಯಿತು!!

---

ದ್ವಂದ್ವ ಉಲ್ಬಣಿಸಿತು

ಒಂದು‌ ಕ್ಷಣ ಮೌನ, ಚಿಂತನೆ

!!??

ನನ್ನ ಭಾವ,

ಗಿಡದ ಭಾವದ

ಹೊಂದಾಣಿಕೆ ಹೇಗೆ?

------

ಥಟ್ಟನೇ ಹೊಳೆಯಿತು ಉಪಾಯ

------

ಆಹಾ!

ಒಗೆದೇಬಿಟ್ಟೆ

ಒಂದು ಅನುಮೋದನೆಯ

---

ಇನ್ನು ಮುಂದೆ

ಮದ್ಯಾಹ್ನದ ನಂತರ

ಹೂವ ಬಿಡಿಸಿ ದೇವರಿಗರ್ಪಿಸುವೆ

ನಿನ್ನ ಕಂದಮ್ಮಗಳು

ಅರ್ಧ ದಿನ

ನಿನ್ನ ಮಡಿಲಲ್ಲೇ ನಲಿಯಲಿ

ಇನ್ನರ್ಧ ದಿನ ,

ಆ ದೇವನ ಮಡಿಲಲ್ಲಿ ಮೆರೆದು, ಒರಗಲಿ

-----------

ನಿನ್ನ ಭಾವ, ನಂಬಿಕೆಗೂ ಬೆಲೆ

ನನ್ನದಕ್ಕೂ ಕೂಡ

----

"ತಥಾಸ್ತು"

ಎಂದೇಬಿಟ್ಟಿತು ನನ್ನ ಪ್ರೀತಿಯ ಗಿಡ

------

ಒಡಂಬಡಿಕೆಗೆ 

ಇಬ್ಬರ ಮುಗುಳ್ನಗೆಯ ಸಹಿ

----------

ಈಗ ನನಗನಿಸಿದ್ದು 

“ ಈ ಗಿಡ ಅರಳಿಸಿದ್ದು

ಸುಂದರ ಹೂಗಳನ್ನಷ್ಟೇ ಅಲ್ಲ

ವೇದ, ಉಪನಿಷತ್, 

ಭಗವದ್ಗೀತೆಯ ಸಾರವನ್ನು

"

*************

ಸಾಷ್ಟಾಂಗ ನಮಿಸಿದೆ

ನನ್ನ  ಹೂಗಿಡಕ್ಕೆ  

*****************

      

ಕಾಮೆಂಟ್‌ಗಳು

  1. ಅರ್ಥಪೂರ್ಣ, ಭಾವ ಪ್ರಪಂಚ... 👌🏼👌🏼🙏🏼🙏🏼

    ಪ್ರತ್ಯುತ್ತರಅಳಿಸಿ
  2. 😍 ತುಂಬಾ ಚೆನ್ನಾಗಿದೆ ನಿಮ್ಮ ಸಂಭಾಷಣೆ ಮತ್ತು ಅಲ್ಲಿರುವ ತತ್ವೋಪದೇಶ. ನಿಜ, ಹುಟ್ಟು ಅದರ ನಿಜಾರ್ಥದಲ್ಲಿ ಸಾರ್ಥಕವಾಗಬೇಕು...👏👌

    ಪ್ರತ್ಯುತ್ತರಅಳಿಸಿ
  3. ತುಂಬಾ ಚೆನ್ನಾಗಿದೆ ಸಂಭಾಷಣೆ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಟವೋ ಅಥವಾ ಪ್ರೀತಿಯೋ?

ಕವಿತಾ ಸಂಗೀತ ಸಲ್ಲಾಪ - ಸಾಗರದ ಕಾರ್ಯಕ್ರಮ-16 ಜನವರಿ 26 - ಒಂದು ಅವಲೋಕನ

ಗಿಡದ ಜೊತೆ ನನ್ನ ಸಲ್ಲಾಪ -ಸಂಚಿಕೆ #1 -ಪೂಜೆ ಓಕೆ – ಹೂವೇ ಯಾಕೆ ?-ಬರಹ